ಒಂದೊಂದು ಕ್ಷೇತ್ರದಲಿ
॥ ♫ ॥
ಒಂದೊಂದು ಕ್ಷೇತ್ರದಲಿ ನೀನು ಮೆರೆಯುತ
ಸದ್ಭಕ್ತರುದ್ದಾರ ನೀನು ಮಾಡುವೆ ॥ಪ॥
॥ ಒಂದೊಂದು ॥ ♫ ॥
ನೀನೊಲಿದಂತಹ ನೆಲವೆಲ್ಲ ಪುಣ್ಯ
ಆ ನೆಲ ಭುವಿಯಲ್ಲಿ ಪುಣ್ಯಕ್ಷೇತ್ರವು
ಮುಂಬಯಿಯಲ್ಲಿ ನಿನ್ನ ಪ್ರಥಮ ಆಶ್ರಮ
ಮಾಡಿದೆ ನೀನು ಭೀಮಾಶಂಕರವನ್ನು ॥೧॥
॥ ಒಂದೊಂದು ॥ ♫ ॥
ಶಿವರಾತ್ರಿಯ ಶುಭದಿನದಿ ನೀನು
ಶಿವನ ರೂಪವ ಸಾಂಬಶಿವ ಸದಾನಂದ
ಬಿಜಾಪುರದಲಿ ನಿನ್ನಯ ವೈಭವ
ದತ್ತ ಜಯಂತಿಯಂದು ಅಲ್ಲಿ ತೋರುವುದು ॥೨॥
॥ ಒಂದೊಂದು ॥ ♫ ॥
ಬೆಂಗಳೂರು ನಗರದಿ ವೈಭವ ತೋರಿದೆ
ಗುರುಪೌರ್ಣಿಮೆಯ ಮಹಿಮೆ ತಿಳಿಸಿದೆ
ರಾಯಾಪುರವನ್ನು ಶ್ರೀಕ್ಷೇತ್ರ ಮಾಡಿದೆ
ನಿಜ ಭಕುತರಿಗೆ ನೀನು ಒಲಿಯುವೆ ॥೩॥
॥ ಒಂದೊಂದು ॥