Karuneye Kailasa

ಕರುಣೆಯೇ ಕೈಲಾಸ

॥ ♫ ॥

ಕರುಣೆಯೇ ಕೈಲಾಸ ಒಲುಮೆಯೇ ವೈಕುಂಠ
ದತ್ತಾಲಯ ಮಹಿಮನಾ ಶ್ರೀ ಗುರು ಸದಾನಂದನಾ

ರಾಯಾಪೂರ ಗ್ರಾಮದಿ ಉತ್ತುಂಗ ತಾಣದಿ
ದತ್ತಮಂದಿರದಲ್ಲಿ ನೆಲೆಸಿರುವಾ ಗುರುವಿನಾ ॥೧॥

ಕಾಣುತೆನುತ ಬರುವರು ಭಕುತ ಜನರು ನಿತ್ಯದಿ
ನೆನೆಸಿದೊಡನೆ ಕನಸಿನಲ್ಲಿ ದರುಶನಾ ಗುರುವಿನಾ ॥೨॥

॥ ಕರುಣೆಯೇ ॥ ೨ ಬಾರಿ ॥ ♫ ॥

ಭಜಿಸು ನಿತ್ಯ ದತ್ತನಾ ಸದಾನಂದ ಗುರುವಿನಾ
ನೇಮ ನೀತಿ ನ್ಯಾಯಕೆ ದತ್ತ ಗುರುವು ನೀಡುವಾ ॥೩॥

ನೀನೆಯೆಂದು ನಂಬಿ ಬಂದ ನಿಜ ಭಕ್ತಗೆ ಮೆಚ್ಚುವಾ
ಶಕ್ತಿಯಾಗಿ ನಡೆಸುವಾ ಮುಕ್ತಿಯನ್ನು ನೀಡುವಾ ॥೪॥

॥ ಕರುಣೆಯೇ ॥ ೨ ಬಾರಿ ॥ ♫ ॥

ಸತ್ಯಪ್ರಿಯ ಸತ್ಯಕೆ ಸಾಕ್ಷಾತ್ ಗುರು ರಾಯನಾ
ಕೇಳಿದವಗೆ ಬೇಕಾದುದ ಕೊಟ್ಟ ಸದಾನಂದನಾ ॥೫॥

ನೆನೆಸಿದೊಡನೆ ಮನಸ್ಸಿನಲ್ಲಿ ಕಾಣುವವನು ಪೂಜ್ಯನಾ
ಪಾವನವು ಪುಣ್ಯಭೂಮಿ ಪಡೆದ ಗುರು ಜಂಗಮನಾ ॥೬॥

॥ ಕರುಣೆಯೇ ॥ ೨ ಬಾರಿ ॥ ♫ ॥

ಗುರುರಾಜ ಗುರುವಿನ ಸದಾನಂದ ಗುರುವಿನ
ಗುರುರಾಜ ಗುರುವಿನ ಗುರುದತ್ತ ರಾಜನಾ ॥೨ ಬಾರಿ॥

ಗುರುರಾಜ ಗುರುವಿನ ಹಾಲಬಾವಿ ಗುರುವಿನಾ
ಗುರುರಾಜ ಗುರುವಿನ ಕುದುರೆಸ್ವಾಮಿ ಗುರುವಿನಾ ॥೭॥

॥ ಕರುಣೆಯೇ ॥